ಪ್ರಚಾರಕ್ಕೆ ಆಗಮಿಸಿದ ಯಧುವೀರ್ ಒಡೆಯರ್ ಸ್ವಾಗತಕ್ಕೆ ಇಡೀ ಗ್ರಾಮವನ್ನೆ ಸಿಂಗರಿಸಿದ ಆಲನಹಳ್ಳಿ ಜನತೆ

ಪ್ರಚಾರಕ್ಕೆ ಆಗಮಿಸಿದ ಯಧುವೀರ್ ಒಡೆಯರ್ ಸ್ವಾಗತಕ್ಕೆ ಇಡೀ ಗ್ರಾಮವನ್ನೆ ಸಿಂಗರಿಸಿದ ಆಲನಹಳ್ಳಿ ಜನತೆ

ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಯಧುವೀರ್ ಒಡೆಯರ್ ರವರ ಪ್ರಚಾರ ಮುಂದುವರೆದಿದ್ದು ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ಆಲನಹಳ್ಳಿ ಗ್ರಾಮಕ್ಕೆ ಪ್ರಚಾರಕ್ಕೆ ಆಗಮಿಸಿದ ಯಧುವೀರ್ ರವರಿಗೆ ಭವ್ಯಸ್ವಾಗತ ದೊರೆತಿದ್ದು ಯಧುವೀರ್ ಸ್ವಾಗತಕ್ಕೆ ಇಡೀ ಗ್ರಾಮವನ್ನೆ ಹಬ್ಬದ ಮಾದರಿಯಲ್ಲಿ ತಳಿರು ತೊರಣಗಳಿಂದ ಸಿಂಗರಿಸಿ ರಸ್ತೆಯುದ್ದಕ್ಕೂ ರಂಗೋಲಿಯ ಚಿತ್ರಿಸಿ, ಹೂಮಳೆಗರೆದು ರಥದ ಮೆರವಣಿಗೆ ಸಾಗುವ ರೀತಿ ಮಹಾರಾಜರನ್ನು ಪೂಜನೀಯ ಭಾವದಿಂದ ಸ್ವಾಗತಿಸಿದರು,

ಮಹಾರಾಜರನ್ನು ನೋಡಲು ತಾಸು ಗಟ್ಟಲೆ ಕಾದು ನಿಂತಿದ್ದರು,

ಈ ವೇಳೆ ಮಾತನಾಡಿದ ಮೈತ್ರಿ ಅಭ್ಯರ್ಥಿ ಯಧುವೀರ್ ಒಡೆಯರ್ ಭವ್ಯ ಸ್ವಾಗತಕ್ಕಾಗಿ ಧನ್ಯವಾದ ತಿಳಿಸಿ ವಿಕಸಿತ ಭಾರತದ ಪರಿಕಲ್ಪನೆಯನ್ನು ಸಕಾರಗೊಳಿಸಲು ಮೊದಿಯವರ ಕೈ ಬಲಪಡಿಸಬೇಕಿದ್ದು ಅದಕ್ಕಾಗಿ ಮೈತ್ರಿ ಅಭ್ಯರ್ಥಿಯಾದ ನನಗೆ ಮತ ನೀಡುವ ಮೂಲಕ ಚುನಾವಣೆಯಲ್ಲಿ ಗೆಲ್ಲಿಸಿ ನಾನು ನಿಮ್ಮೊಡನೆ ಇದ್ದು ನಿಮ್ಮ ಸೇವೆ ಮಾಡಲಿದ್ದೇನೆ ಎಂದು ಮನವಿ ಮಾಡಿದರು.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸತತ ಮೂರುನಾಲ್ಕು ದಿನದಿಂದ ಶಾಸಕ ಜಿ.ಟಿ.ದೇವೇಗೌಡರು
ಸಾರಥಿಯಂತೆ ಯದುವೀರರನ್ನು ಮುನ್ನಡೆಸುತ್ತ
ಪ್ರಚಾರ ನಡೆಸಿದರು‌ ಅವರಿಗೆ ಬಿಜೆಪಿ ಯುವ ಮುಖಂಡ ಕವೀಶ್ ಗೌಡ ಸಾತ್ ನೀಡಿದರು,

ಒಟ್ಟಾರೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅದರಲ್ಲೂ ಆಲನಹಳ್ಳಿ ಜನತೆ ಮೈಸೂರು ಕೊಡಗು ಕ್ಷೇತ್ರದ ಮೈತ್ರಿ ಅಭ್ಯರ್ಥಿ ಯದುವೀರ್ ಈಗಾಗಲೇ ಗೆದ್ದಾಗಿದೆ ಎನ್ನುವ ರೀತಿ ಸಂಭ್ರಮಿಸಿದರು

ವರದಿ :ನಂದಿನಿ ಮೈಸೂರು

https://whatsapp.com/channel/0029VaA61PAC6ZvhcEyEjS0S To Join Hind- Samachar What’s up Channel click the above link

ಕೇವಲ ಐದು ತಿಂಗಳ ಕಾಲಾವಧಿಗಳಲ್ಲಿ ನಿಮ್ಮ ಕನಸಿನ ಮನೆ ನಿರ್ಮಾಣ ಮಾಡಿಕೊಡುವ ವಿಶ್ವಸಾರ್ಹ ಕಂಪನಿ .ಸಾಗರದ ಪ್ರಪ್ರಥಮ ಕನ್ಸ್ಟ್ರಕ್ಷನ್ ಕಂಪನಿ, ಸಿಮ್ – ಟೆಕ್ ಇಂಟರ್ ನ್ಯಾಷನಲ್(cem-tech international construction).ಸಂಪರ್ಕಿಸಿ: 9916432555 ,9986432555

Leave a Reply

Your email address will not be published. Required fields are marked *