![](https://hind-samachar.com/wp-content/uploads/2022/08/HIND-SAMACHAR-logo-1.jpg)
ಭದ್ರಾವತಿ: ಭದ್ರಾವತಿ ಮತ್ತು ಶಿವಮೊಗ್ಗದಲ್ಲಿ ಸೆಕ್ಷನ್ 144 ಜಾರಿಯಾಗಿದ್ದರೂ ,ಭದ್ರಾವತಿಯಲ್ಲಿ ಬಜರಂಗದಳದ ಕಾರ್ಯಕರ್ತನ ಮೇಲೆ ಹಲ್ಲೆ .
![](https://hind-samachar.com/wp-content/uploads/2022/08/sunil.jpg)
ಸುನೀಲ್ ಎಂಬ ಬಜರಂಗದಳದ ಯುವಕನಮೇಲೆ ಮುಬಾರಕ್ ಯಾನೆ ಡಿಚ್ಚಿ ಎಂಬಾತ ನೆಹರೂ ನಗರದಲ್ಲಿ ಅಡ್ಡಕಟ್ಟಿ ದಾಳಿ ನಡೆಸಿದ್ದಾನೆ.
ನಿನ್ನೆ ಓರ್ವ ಯುವಕನನ್ನ ಡಿಚ್ಚಿ ಮುಬಾರಕ್ ಹಲ್ಲೆ ನಡೆಸುವ ವೇಳೆ ಸುನೀಲ್ ಮತ್ತು ಸಹಚರರು ಜಗಳ ಬಿಡಿಸಿದ್ದರು. ಈ ವೇಳೆ ಸುನೀಲ್ ನಿಗೆ ಟಾರ್ಗೆಟ್ ಮಾಡಿದ ಮುಬಾರಕ್ ಚಾಕುವಿನಿಂದ ಹಲ್ಲೆ ನಡೆಸಲು ಉತ್ನಿಸಿದ್ದಾನೆ.
ನೆಹರೂ ನಗರದ ಮನೆಯ ಮುಂದೆ ಗಾರೆಕೆಲಸಕ್ಕೆಂದು ಸುನೀಲ್ ನಡೆದುಹೋಗುವಾಗ ರಸ್ತೆ ಅಡ್ಡಕಟ್ಟಿ ಹಲ್ಲೆ ನಡೆಸಿದ್ದಾನೆ. ಸುನೀಲನ ಎಡ ಗೈ, ಭುಜ ಮತ್ತು ತಲೆಗೆ ಕೈಯಿಂದ ಹಲ್ಲೆ ನಡೆಸಲಾಗಿದೆ. ಈ ಬಗ್ಗೆ ಭದ್ರಾವತಿಯ ಹಳೇ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
![](https://hind-samachar.com/wp-content/uploads/2022/08/Sinchana-News-3.jpg)
ವರದಿ: ಸಿಂಚನಾ ಜಯಂತ್ ಬಲೇಗರು
![](https://hind-samachar.com/wp-content/uploads/2022/03/SPS-TRADING-ADD-1-4.jpg)
ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555