ಬಜರಂಗದಳ ಕಾರ್ಯಕರ್ತ ಸುನೀಲ್ ಮೇಲೆ ಹಲ್ಲೆ: ಭದ್ರಾವತಿ

ಭದ್ರಾವತಿ: ಭದ್ರಾವತಿ ಮತ್ತು ಶಿವಮೊಗ್ಗದಲ್ಲಿ ಸೆಕ್ಷನ್ 144 ಜಾರಿಯಾಗಿದ್ದರೂ ,ಭದ್ರಾವತಿಯಲ್ಲಿ ಬಜರಂಗದಳದ ಕಾರ್ಯಕರ್ತನ ಮೇಲೆ ಹಲ್ಲೆ .

ಸುನೀಲ್ ಎಂಬ ಬಜರಂಗದಳದ ಯುವಕನ‌ಮೇಲೆ ಮುಬಾರಕ್ ಯಾನೆ ಡಿಚ್ಚಿ ಎಂಬಾತ ನೆಹರೂ ನಗರದಲ್ಲಿ ಅಡ್ಡಕಟ್ಟಿ ದಾಳಿ ನಡೆಸಿದ್ದಾನೆ.

ನಿನ್ನೆ ಓರ್ವ ಯುವಕನನ್ನ ಡಿಚ್ಚಿ ಮುಬಾರಕ್ ಹಲ್ಲೆ ನಡೆಸುವ ವೇಳೆ ಸುನೀಲ್ ಮತ್ತು ಸಹಚರರು ಜಗಳ ಬಿಡಿಸಿದ್ದರು. ಈ ವೇಳೆ ಸುನೀಲ್ ನಿಗೆ ಟಾರ್ಗೆಟ್ ಮಾಡಿದ ಮುಬಾರಕ್ ಚಾಕುವಿನಿಂದ ಹಲ್ಲೆ ನಡೆಸಲು ಉತ್ನಿಸಿದ್ದಾನೆ.

ನೆಹರೂ ನಗರದ ಮನೆಯ ಮುಂದೆ ಗಾರೆಕೆಲಸಕ್ಕೆಂದು ಸುನೀಲ್ ನಡೆದುಹೋಗುವಾಗ ರಸ್ತೆ ಅಡ್ಡಕಟ್ಟಿ ಹಲ್ಲೆ ನಡೆಸಿದ್ದಾನೆ. ಸುನೀಲನ ಎಡ ಗೈ, ಭುಜ ಮತ್ತು ತಲೆಗೆ ಕೈಯಿಂದ ಹಲ್ಲೆ ನಡೆಸಲಾಗಿದೆ. ಈ ಬಗ್ಗೆ ಭದ್ರಾವತಿಯ ಹಳೇ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವರದಿ: ಸಿಂಚನಾ ಜಯಂತ್ ಬಲೇಗರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555

Leave a Reply

Your email address will not be published. Required fields are marked *