ಅಮಾವಾಸ್ಯೆ ಪ್ರಯುಕ್ತ ಶ್ರೀ ಕ್ಷೇತ್ರ ಸಿಗಂದೂರು ದೇವಿಯ ದರ್ಶನಕ್ಕೆ ಹರಿದು ಬಂದ ಭಕ್ತ ಸಾಗರ

ಅಮಾವಾಸ್ಯೆ ಪ್ರಯುಕ್ತ ಶ್ರೀ ಕ್ಷೇತ್ರ ಸಿಗಂದೂರು ದೇವಿಯ ದರ್ಶನಕ್ಕೆ ಹರಿದು ಬಂದ ಭಕ್ತ ಸಾಗರ

ಸಾಗರ :- ನಾಡಿನ ಸುಪ್ರಸಿದ್ದ ಪವಿತ್ರ ದೇವಾಲಯವಾದ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸಿಗಂದೂರು ಚೌಡೇಶ್ವರಿ ದರ್ಶನ ಮಾಡಲು ಹರಿದು ಬಂದ ಜನಸಾಗರ. ಮಳೆಯೇ ಬಾರದೇ ಲಿಂಗನಮಕ್ಕಿ ಜಲಾಶಯ ಆಣೆಕಟ್ಟು ಶರಾವತಿ ಹಿನ್ನೀರು ಕಡಿಮೆ ಆಗಿರುವ ಸಕಾರಣ ಕಳಸವಳ್ಳಿ ಅಂಬಾರಗೋಡ್ಲು ಲಾಂಚ್ ನಲ್ಲಿ ವಾಹನಗಳನ್ನೂ ಸಾಗಣೆ ಮಾಡದೇ ಜನರನ್ನು ಮಾತ್ರಾ ಸಾಗಣೆ ಮಾಡುತ್ತಿದ್ದೂ, ಇಂದು ಆಗಮಿಸುವ ಭಕ್ತ ಸಾಗರ ಕಂಡು ಲಾಂಚ್ ಓಡಿಸುವವರು ತಬ್ಬಿಬ್ಬು ಗೊಂಡಿದ್ದು, ಸುರಕ್ಷತಾ ದೃಷ್ಟಿಯಿಂದ ಶಾಂತಿ ಸೌಹಾರ್ದತೆಗಾಗಿ ಧಕ್ಷ ಪ್ರಾಮಾಣಿಕ ಜನಸ್ನೇಹಿಯಾದ ಸಾಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿಗಳಾದ ಸಿಪಿಐ ಪ್ರವೀಣ್ ಕುಮಾರ್ ರವರು ವಿಶೇಷ ಪೊಲೀಸರನ್ನೂ ನೇಮಿಸಿದ್ದೂ ಕಂಡುಬಂದಿದೆ.

✒️ ಓಂಕಾರ ಎಸ್. ವಿ. ತಾಳಗುಪ್ಪ

Leave a Reply

Your email address will not be published. Required fields are marked *