“ಶೀತ, ಕೆಮ್ಮಿಗೆ ನೀಡುವ ಔಷಧಿ ಸೇವಿಸಿ 66 ಮಕ್ಕಳು ಸಾವು”

ಭಾರತೀಯ ಮೂಲದ ಕಂಪನಿ ತಯಾರಿಸಿರುವ ಸಿರಪ್ ಸೇವಿಸಿ ಆಫ್ರಿಕಾದ 66 ಮಕ್ಕಳು ಮೃತಪಟ್ಟಿದ್ದಾರೆ. ಎಂದು ವಿಶ್ವ ಆರೋಗ್ಯ ಸಂಸ್ಥೆ ಅನುಮಾನಿಸಿದ್ದು, ತಕ್ಷಣವೇ ತನಿಖೆ ನೆಡೆಯುವಂತೆ ಕೇಂದ್ರ ಔಷಧಿ ನಿಯಂತ್ರಕ ಮಂಡಳಿಗೆ ಸೂಚನೆ ನೀಡಿದೆ.

ದೆಹಲಿ ಮೂಲದ ಖಾಸಗಿ ಕಂಪನಿ ಈ ಔಷಧಿವನ್ನು ತಯಾರಿಸಿದೆ. ಕೆಮ್ಮು, ಶೀತಕ್ಕಾಗಿ ಈ ಸಿರಪ್‌ ನೀಡಲಾಗಿದ್ದು, ಇದರ ಸೇವನೆಯಿಂದ ಮಕ್ಕಳು ಮೂತ್ರಪಿಂಡ ಸೋಂಕಿಗೆ ಗುರಿಯಾಗಿದ್ದಾರೆ. ಕಂಪನಿ ಸಿರಪ್‌ ತಯಾರಿಸಿ ಗ್ಯಾಬಿಯಾಗೆ ರಫ್ತು ಮಾಡಿತ್ತು.

ಇದರಿಂದ ಮಕ್ಕಳು ಪ್ರಾಣವನ್ನೇ ಕಳೆದುಕೊಂಡಿದ್ದು, ಈ ಕಂಪನಿ ತಯಾರಿಸಿರುವ 4 ಸಿರಪ್‌ ಗಳ ಮೇಲೆ ತನಿಖೆ ನೆಡೆಸಲು ಕೋರಿದೆ.

ವಿಶ್ವ ಸಂಸ್ಥೆ ಸೂಚನೆ ಮೇರೆಗೆ ತನಿಖೆ ಆರಂಭವಾಗಿದ್ದು, ಶೀಘ್ರವೇ ವರದಿ ತಿಳಿಸುವುದಾಗಿ ತಿಳಿಸಿದೆ.

ವರದಿ: ಸಿಂಚನಾ ಜಯಂತ ಬಲೇಗಾರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್‌. ಪಿ. ಎಸ್‌. ಟ್ರೇಡಿಂಗ್‌ mob:9880432555.

Leave a Reply

Your email address will not be published. Required fields are marked *