ಬೆಂಗಳೂರು: ವಿಧಾನಸೌಧದ ಮುಂದೆ ಅಪ್ಪುಗೆ ಕರ್ನಾಟಕ ರತ್ನ ಗೌರವ ಅರ್ಪಿಸಲು ಸಿದ್ಧತೆ.
ಇಂದು ವಿಧಾನಸೌಧದ ಮುಂದೆ ಅಪ್ಪುಗೆ ಕರ್ನಾಟಕ ರತ್ನ ಗೌರವ ಅರ್ಪಿಸಲು ಎಲ್ಲಾ ಸಿದ್ಧತೆಗಳೂ ಆಗ್ತಿದೆ. ವಿಧಾನಸೌಧಕ್ಕೆ ಕಲರ್ ಫುಲ್ ಆಗಿ ಸಿಂಗಾರ ಮಾಡಲಾಗಿದೆ.
ಸರ್ಕಾರದ ಹಲವು ಯೋಜನೆಗಳಿಗೆ ಬೆನ್ನೆಲುಬಾಗಿದ್ದ ಅಪ್ಪುಗೆ ಬೊಮ್ಮಾಯಿ ಸರ್ಕಾರ ಕರ್ನಾಟಕ ರತ್ನ ನೀಡಲು ಸಿದ್ಧತೆ ನಡೆಸಿದೆ.
ಇನ್ನೂ ಇಂಡಿಯನ್ ಸೂಪರ್ ಸ್ಟಾರ್, ಅಭಿಮಾನಿಗಳ ತಲೈವಾ ರಜನಿಕಾಂತ್ ಬೆಂಗಳೂರಿಗೆ ಬಂದಿಳಿದಿದ್ದಾರೆ. ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಸೂಪರ್ ಸ್ಟಾರ್ ಬಂದಿಳಿದಿದ್ದಾರೆ.
ರಜನಿಕಾಂತ್ ಅವರನ್ನ ಸರ್ಕಾರದ ವತಿಯಿಂದ ಕೆ. ಸುಧಾಕರ್ ಬರಮಾಡಿಕೊಂಡರು. ರಜನಿಕಾಂತ್ ಅವರಿಗೆ ಹೂಗುಚ್ಛ ನೀಡಿ ಸ್ವಾಗತ ಮಾಡಲಾಯಿತು. ಇನ್ನೂ ಸಂಜೆ ವೇಳೆಗೆ ವಿಧಾನಸೌಧಕ್ಕೆ ರಜನಿಕಾಂತ್ ಬರಲಿದ್ದಾರೆ.
ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್. ಪಿ. ಎಸ್. ಟ್ರೇಡಿಂಗ್ mob:9880432555.