ಶನಿ ದೇವರ ಗುಡ್ಡಪ್ಪ ಪುಟ್ಟಸ್ವಾಮಿ ಅವರಿಗೆ ನುಡಿ ನಮನ ಬಡ ವಿದ್ಯಾರ್ಥಿಗಳಿಗೆ ಲೇಖನಿ ಸಾಮಗ್ರಿಗಳ ವಿತರಣೆ

ತಾಂಡವಪುರ :- ಶನಿ ದೇವರ ಗುಡ್ಡಪ್ಪ ಪುಟ್ಟಸ್ವಾಮಿ ಅವರಿಗೆ ನುಡಿ ನಮನ ಬಡ ವಿದ್ಯಾರ್ಥಿಗಳಿಗೆ ಲೇಖನಿ ಸಾಮಗ್ರಿಗಳ ವಿತರಣೆ.

ಇತ್ತೀಚಿಗೆ ನಿಧನ ಹೊಂದಿದ ಮಾಕನಹುಂಡಿ ಶನಿ ದೇವರ ಗುಡ್ಡಪ್ಪ ಪುಟ್ಟಸ್ವಾಮಿ ಅವರಿಗೆ ರಾಯನ ಹುಂಡಿ ಗ್ರಾಮದ ಕಂಸಾಳೆ ಕಲಾವಿದರು ಹಾಗೂ ಗ್ರಾಮಸ್ಥರು ನುಡಿ ನಮನ ಅರ್ಪಿಸಿದರು. ಮೈಸೂರು ಜಿಲ್ಲೆ ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ರಾಯನ ಹುಂಡಿ ಗ್ರಾಮದಲ್ಲಿ ಇತ್ತೀಚಿಗೆ ನಿಧನ ಹೊಂದಿದ ಮಾಕನಹುಂಡಿ ಗ್ರಾಮದ ಶನಿ ದೇವರ ಗುಡ್ಡಪ್ಪ ಪುಟ್ಟಸ್ವಾಮಿ ಅವರ ಸ್ಮರಣಾರ್ಥ ಗ್ರಾಮದಲ್ಲಿ ನುಡಿನಮನ ಹಾಗೂ ಬಡ ವಿದ್ಯಾರ್ಥಿಗಳಿಗೆ ಲೇಖನಿ ಸಾಮಗ್ರಿಗಳನ್ನು ವಿತರಿಸಿ ನುಡಿ ನಮನ ಹಾಗೂ ಶ್ರದ್ಧಾಂಜಲಿ ಅರ್ಪಿಸಿದರು.

ಇದೇ ವೇಳೆ ಕಂಸಾಳೆ ಕಲಾವಿದ ಮಾದಪ್ಪನವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಶನಿ ದೇವರ ಗುಡ್ಡಪ್ಪ ಪುಟ್ಟಸ್ವಾಮಿಯವರಿಗೂ ನಮ್ಮ ಗ್ರಾಮಕ್ಕು ಅತೀವ ಸಂಬಂಧವಿದ್ದು, ಅವರಿಗೆ ಶಿಕ್ಷಣದಲ್ಲಿ ಹೆಚ್ಚು ಆಸಕ್ತಿ ಇದ್ದು ಅವರ ಆಸೆಯಂತೆ ಬಡ ವಿದ್ಯಾರ್ಥಿಗಳಿಗೆ ಲೇಖನಿ ಸಾಮಗ್ರಿಗಳನ್ನು ವಿತರಿಸುವ ಜೊತೆಗೆ, ಗ್ರಾಮಸ್ಥರಿಗೆ ಹಾಗೂ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಹಾಗೂ ಹರಿಕಥೆಯನ್ನು ಏರ್ಪಡಿಸಲಾಗಿತ್ತು ಎಂದರು. ಈ ಸಂದರ್ಭದಲ್ಲಿ ಮಾಕನಹುಂಡಿ ಹಾಗೂ ರಾಯನ ಹುಂಡಿ ಗ್ರಾಮಸ್ಥರು ಭಕ್ತಾದಿಗಳು ಹಾಜರಿದ್ದರು.

ಕೇವಲ ಐದು ತಿಂಗಳ ಕಾಲವಾದಿಗಳಲ್ಲಿ ನಿಮ್ಮ ಕನಸಿನ ಮನೆ ನಿರ್ಮಾಣ ಮಾಡಿಕೊಡುವ ವಿಶ್ವಾಸಾರ್ಹ ಕಂಪನಿ. ಸಾಗರದ ಪ್ರಪ್ರಥಮ ಕನ್ಸ್ಟ್ರಕ್ಷನ್ ಕಂಪನಿ, ಸಿಮ್-ಟೆಕ್ ಇಂಟೆರ್ ನ್ಯಾಷನಲ್ (Cem-Tech International Construction). ಸಂಪರ್ಕಿಸಿ :- Mob: 9880432555, Off: 08183226655.

Leave a Reply

Your email address will not be published. Required fields are marked *